Savitha nagabhushan biography channel
Nagabhushana wife!
ಶಿವಮೊಗ್ಗತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸವಿತಾ ನಾಗಭೂಷಣ್ ಸರ್ವಾಧ್ಯಕ್ಷೆ
ಶಿವಮೊಗ್ಗ: ಶಿವಮೊಗ್ಗ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಸಾಹಿತಿ ಸವಿತಾ ನಾಗಭೂಷಣ ಅವರನ್ನು ಆಯ್ಕೆ ಮಾಡಲಾಗಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಭಾನುವಾರ ನಡೆಸಿದ ಸಭೆಯಲ್ಲಿ ನವೆಂಬರ್ 19ರಂದು ಪಿಳ್ಳಂಗಿರಿಯಲ್ಲಿ ನಡೆಯಲಿರುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸವಿತಾ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸರ್ವಾಧ್ಯಕ್ಷರ ಆಯ್ಕೆಗೆ ತಾಲೂಕಿನ ವಿವಿಧ ಬರಹಗಾರರು, ಲೇಖಕಕರು, ಸಾಹಿತಿಗಳ ಹೆಸರುಗಳು ಪ್ರಸ್ತಾಪವಾದವು. ಅಂತಿಮವಾಗಿ ಸವಿತಾ ನಾಗಭೂಷಣ ಅವರನ್ನು ಆಯ್ಕೆ ಮಾಡಲು ಸಮಿತಿ ಸರ್ವಾನುಮತದ ತೀರ್ಮಾನ ಕೈಗೊಂಡಿತು.
Nagabhushana family
ಸಭೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಸಂಪತ್ಕುಮಾರ್, ಕೋಶಾಧ್ಯಕ್ಷ ಎಚ್.ರವಿಶಂಕರ್, ಕಾರ್ಯದರ್ಶಿ ಚನ್ನಬಸಪ್ಪ ನ್ಯಾಮತಿ, ಎಚ್.ಎಸ್. ಶಂಕರಪ್ಪ ಮತ್ತಿತರರು ಹಾಜರಿದ್ದರು.
ವಿಶೇಷವೆಂದರೆ ಸವಿತಾ ನಾಗಭೂಷಣ್ ಅವರ ಪತಿ ಸಮಾಜವಾದಿ ಚಿಂತಕ ಮತ್ತು ಲೇಖಕ ಡಿ.ಎಸ್.ನಾಗಭೂಷಣ್ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಇದೇ ಸಂದರ್ಭ ಘೋಷಿಸಿಸಿದೆ.
ಪರಿಚಯ: ಸಾಹಿತಿ ಸವಿತಾ ನಾಗಭೂಷಣ ಅವರು 1961ರಲ್ಲಿ ಚಿಕ್ಕಮಗಳೂರಲ್ಲಿ ಜನಿಸಿ ತಮ್ಮ ಬಾಲ್ಯವನ್ನು ಶಿವಮೊಗ್ಗದಲ್ಲಿ ಕಳೆದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಣವನ್ನು ಸರ್ವ